ಮಗು

ಅರಳಿಹುದು
ನಮ್ಮ ಮಡಿಲೊಳಗೊಂದು
ಮಲ್ಲಿಗೆಯ ಮುಗುಳು
ತುಂಬಿಹುದು ಮನೆ, ಮಂದಿ ಮನಸೆಲ್ಲಾ
ಒಮ್ಮುಖವಾಗಿ.

ಮರೆಯುವೆವು
ನಮ್ಮನು, ನಮ್ಮದನು
ನೋಡುವುದರಲ್ಲಿ
ನಿಸರ್ಗದೀ ವಿಶುದ್ಧ ಮೂರ್ತಿಯ
ಒಂದೊಂದು ಚಿಗುರು ನಡೆ, ನುಡಿ, ಆಟ, ನೋಟಗಳ.

ಅಂತೆಯೇ
ಮಾತರಿಯದ ಕಂದಾ
ಯಾತು ಯಾತಕೊ ಸಂಕಟ ಪಡುವಾಗ
ಯಾತನೆಯ ಪಡಿಯುಕ್ಕಿ ಹರಿಯುವುದು.

ಕೆಲವೊಮ್ಮೆ
ಗೊತ್ತರಿಯದ ಕಂದ
ಇಸ್ಸಿ, ಉಚ್ಚೆಯ ಅಭಿಷೇಕ ಮಾಡಿದಾಗ
ಕಿತ್ತರಿವ ಕೋಪ ಉಕ್ಕುವುದು
ಮಕ್ಕಳೆಂದರೆ ಮೂಗು ಮುರಿಯುವಂತಾಗುವುದಾದರೂ
ಹಾಲು, ಹಾಲು ಮನಸ
ಅದ್ಭುತ ಕೌತುಕ ಭಾವದ
ಮುದ್ದು, ಮುದ್ದಾದ ಮಗುವ
ಮುದ್ದಾಡದಿರಬಹುದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಂದರ ಮನಸುಗಳು
Next post ರೂಪಾಂತರ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys